ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನಕ್ಕೆ ಬೆಳಕಿನ ವಿಕಾರ ರೂಪ: ಹೊಸ್ತೋಟ ಮಂಜುನಾಥ ಭಾಗವತ

ಲೇಖಕರು : ವಿಜಯ ಕರ್ನಾಟಕ
ಮ೦ಗಳವಾರ, ಮಾರ್ಚ್ 1 , 2016
ಮಾರ್ಚ್ 1, 2016

ಯಕ್ಷಗಾನಕ್ಕೆ ಬೆಳಕಿನ ವಿಕಾರ ರೂಪ: ಹೊಸ್ತೋಟ ಮಂಜುನಾಥ ಭಾಗವತ

ಸಿದ್ದಾಪುರ : ಜನರು ಕೇಳುತ್ತಿದ್ದಾರೆ ಎಂಬ ನೆಪದಿಂದ ಇಂದು ಯಕ್ಷಗಾನ ದೈಹಿಕ ಕಸರತ್ತಿನಂತಾಗಿದ್ದು, ಜೊತೆಯಲ್ಲಿ ಬೆಳಕಿನ ಕಸರತ್ತನ್ನು ಸೇರಿಸಿ ವಿಕಾರವಾಗುವಂತೆ ಮಾಡುತ್ತಿದ್ದಾರೆ ಎಂದು ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತ ಬೇಸರ ವ್ಯಕ್ತಪಡಿಸಿದರು.

ಅವರು ಭಾನುವಾರ ಸಂಜೆ ಪಟ್ಟಣದ ಬಾಲಿಕೊಪ್ಪ ಶಾಲೆಯ ಸಭಾಭವನದಲ್ಲಿ ಚಿಂತನ ರಂಗ ಅಧ್ಯಯನ ಕೇಂದ್ರ, ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ, ಡಾ.ಟಿ.ದಯಾನಂದ ಪೆ ಮತ್ತು ಸತೀಶ ಪೆ ಯಕ್ಷಗಾನ ಕೇಂದ್ರ ಮಂಗಳೂರು, ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ದಿ.ಕಷ್ಣ ಭಂಡಾರಿ ಸೋಂದಾ ಇವರಿಂದ ರಚಿತಗೊಂಡ ಯಕ್ಷಗಾನ ಕೈಪಿಡಿಯ ಪುನರ್ಮುದ್ರಣ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಯಕ್ಷಗಾನಕ್ಕೆ ಒಂದು ಲಕ್ಷಣವಿದೆ. ಇದು ಅಪ್ಪಟ ಕಲೆಯಾಗಿದ್ದು, ಬೇರೆಯದರಿಂದ ಸಾಲ ಪಡೆಯುವ ಮೂಲಕ ಬೆಳೆಯಬೇಕಾದ ಕಲೆಯಲ್ಲ. ಈ ಕಲೆ ಸಂಗೀತ, ನಾಟ್ಯ, ಸಾಹಿತ್ಯಕ್ಕೆ ಮೂಲ ಪ್ರೇರಣೆಯಾಗಬಲ್ಲದು. ಯಕ್ಷಗಾನವೂ ಹೀಗಿರಬೇಕೆಂದು ಒಪ್ಪಿಕೊಂಡು ಸುಮಾರು 250 ವರ್ಷವಾಗಿರುವ ಸಾಧ್ಯತೆ ಇದ್ದು ಯಕ್ಷಗಾನವನ್ನು ಕೆಲವು ವರ್ಗಕ್ಕೆ ಸೀಮಿತಗೊಳಿಸದೆ ಪ್ರೇಕ್ಷಕರತ್ತ ಒಯ್ಯುವ ಕಾಲದಲ್ಲಿ ಈ ಪುಸ್ತಕ ಬಿಡುಗಡೆಯಾಗಿದೆ.

ಡಾ.ಶಿವರಾಮ ಕಾರಂತರು ಯಕ್ಷಗಾನದ ಬಗ್ಗೆ ಪುಸ್ತಕ ಬರೆಯುವ ಮೊದಲೇ ಉತ್ತರ ಕನ್ನಡ ನೆಲದ ಪ್ರತಿಭಾವಂತ ಕಷ್ಣ ಭಂಡಾರಿಯವರು ಈ ಪುಸ್ತಕವನ್ನು ರಚಿಸಿದ್ದು, ವಿದ್ಯೆ ಕೆಲವರ ಸೊತ್ತಾಗಿ,ಬಡತನದಲ್ಲಿ ದಿನಗಳನ್ನು ದೂಡುತ್ತಿದ್ದಾಗಲೂ ಯಕ್ಷಗಾನದ ಮೇಲಿನ ಪ್ರೇಮದಿಂದಾಗಿ ಇಂತಹ ಪುಸ್ತಕವನ್ನು ಪ್ರಕಟಿಸಿರುವ ಭಂಡಾರಿಯವರು ಅಭಿನಂದಾನಾರ್ಹರು ಎಂದು ಹೇಳಿದರು.

ಯಕ್ಷಗಾನ ಕಲೆಯು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಪ್ರಚಲಿತದಲ್ಲಿದ್ದರೂ ನಮ್ಮ ಜಿಲ್ಲೆಯಲ್ಲಿ ಇದರ ಕಲಿಸುವ ಕುರಿತು ಕೆಲಸವಾಗಿದೆ. ಹಲವು ಮಹನೀಯರು ಯಕ್ಷಗಾನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಈ ಯಕ್ಷಗಾನ ಕೆಪಿಡಿಯು ಯಕ್ಷಗಾನ ಕಲಿಯುವವರಿಗೆ ಮಾರ್ಗದರ್ಶಕವಾಗಿದೆ. ಇಲ್ಲಿ ಕೇವಲ ಮುಮ್ಮೇಳದ ಬಗ್ಗೆಯಷ್ಟೆ ಅಲ್ಲ, ಮದ್ದಳೆಯ ಬಗ್ಗೆಯೂ ವಿವರಣೆ ಇದೆ. ಯಾವ ರಾಗ ಎಷ್ಟು ಹಾಡಬೇಕು, ಹೇಗೆ ಹಾಡ ಬೇಕು, ಅದಕ್ಕೆ ಮದ್ದಳೆಯನ್ನು ಯಾವ ಪ್ರಮಾಣದಲ್ಲಿ ನುಡಿಸಬೇಕು ಎನ್ನುವ ಎಲ್ಲಾ ವಿವರಣೆಗಳೂ ಈ ಗ್ರಂಥದಲ್ಲಿ ಅಡಕವಾಗಿದೆ. ಇಂದು ಯಕ್ಷಗಾನದ ಸಂಗೀತದಲ್ಲಿ ಪ್ರಸಿದ್ಧರು ಎಂದು ಮೆರೆದಾಡುತ್ತಿರುವವರು ಈ ಪುಸ್ತಕವನ್ನು ಓದಲೇ ಬೇಕಾಗಿದ್ದು, ಅವರ ಸಂಗೀತ ಎಷ್ಟು ನಿರರ್ಥಕ ಎನ್ನುವುದನ್ನು ಮನಗಾಣಬೇಕಾಗಿದೆ ಎಂದು ಹೇಳಿದರು.

ಪ್ರಸಿದ್ಧ ಯಕ್ಷಗಾನ ಅರ್ಥದಾರಿ ಪ್ರೋ.ಎಂ.ಎ.ಹೆಗಡೆ ಶಿರಸಿ ಅಧ್ಯಕ್ಷತೆವಹಿಸಿದ್ದರು. ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಸದಸ್ಯೆ ಡಾ.ವಿಜಯನಳಿನಿ ರಮೇಶ ಅತಿಥಿಯಾಗಿ ಭಾಗವಹಿಸಿದ್ದರು. ಹಿರಿಯ ಪತ್ರಕರ್ತ ಕಾಶ್ಯಪ ಪರ್ಣಕುಟಿ ಪುಸ್ತಕ ಪರಿಚಯ ಮಾಡಿದರು. ದಿವಾನ್ ಯಕ್ಷ ಸಮೂಹದ ಪಿ.ವಿ.ಹೆಗಡೆ ಹೊಸಗದ್ದೆ, ಡಾ.ವಿಠಲ ಭಂಡಾರಿ, ರಮೇಶ ಹಾರ್ಸಿಮನೆ ಮುಂತಾದವರು ಉಪಸ್ಥಿತರಿದ್ದರು.



ಕೃಪೆ : vijaykarnataka


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ